Spread the love

ಪುನೀತ್ ರಾಜ್ ಕುಮಾರ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರು ಮತ್ತೆ ಮರಳುವುದಿಲ್ಲ ಎನ್ನುವ ಕಟುಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕಿದೆ. ಆದರೆ ಅವರ ಚಿತ್ರರಂಗ ಸೇವೆ ಮತ್ತು ಸಾಮಾಜಿಕ ಸೇವೆ ಹಾಗೂ ಅವರ ವ್ಯಕ್ತಿತ್ವವನ್ನು ಕಂಡ ಜನತೆ ಕರ್ನಾಟಕದಾದ್ಯಂತ ಅವರ ಅಭಿಮಾನವನ್ನು ತಮ್ಮೆದೆಗೆ ಬಿತ್ತಿಕೊಂಡಿದ್ದಾರೆ ಆದರೆ ಅವರ ಆದರ್ಶ ಮತ್ತು ಬದುಕಿನ ಸ್ಫೂರ್ತಿಯನ್ನು ಪಾಠವನ್ನಾಗಿ ತೆಗೆದುಕೊಂಡ ಯುವಪಡೆ ಮತ್ತು ಕೆಲ ಜನತೆ ಇದೀಗ ಅವರನ್ನು ದೇವರಂತೆ ಆರಾಧಿಸುತ್ತಿದೆ ಆದರೆ ಅವರ ಅಕಾಲದ ನಂತರ ಅವರ ಹುಟ್ಟುಹಬ್ಬವನ್ನು ಮಾರ್ಚ್ 17ರಂದು ಅಭಿಮಾನಿಗಳು ನೋವಿನಲ್ಲೇ ಆಚರಿಸುತ್ತಿದ್ದಾರೆ. ಈ ವೇಳೆ ಹಲವು ಸಾಮಾಜಿಕ ಕೆಲಸಗಳನ್ನು ಮಾಡೋಕೆ ಅಭಿಮಾನಿಗಳು ಭರದ ಸಿದ್ಧತೆ ಮಾಡಿಕೊಂಡಿದ್ದು. ಈ ಮಧ್ಯೆ ಅಪ್ಪು ಕುರಿತ ಹಲವು ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ. ಬರ್ತ್ಡೇ ದಿನ ಫ್ಯಾನ್ಸ್ಗೆ ಅಪ್ಪು ನೀಡಿದ್ದ ಸಂದೇಶದ ವಿಡಿಯೋ ಒಂದು ಈಗ ಮತ್ತೆ ಹರಿದಾಡುತ್ತಿದ್ದು, ಸಿಕ್ಕಾ ಪಟ್ಟೆ ವೈರಲ್ ಅಭಿಮಾನಿಗಳ ನೋವವನ್ನು ಹೆಚ್ಚು ಮಾಡಿದೆ.

ಬೆಂಗಳೂರಿನ ಸದಾಶಿವ ನಗರದಲ್ಲಿನ ಪುನೀತ್ ರಾಜ್ ಕುಮಾರ್ ಅವರ ನಿವಾಸಬಳಿ ಪ್ರತಿ ವರ್ಷ ಮಾರ್ಚ್ 16ರ ರಾತ್ರಿ ಅಭಿಮಾನಿಗಳು ಇಲ್ಲಿಗೆ ಆಗಮಿಸುತ್ತಿದ್ದರು. ಅಭಿಮಾನಿಗಳು ಮಧ್ಯರಾತ್ರಿವರೆಗೂ ಅಲ್ಲಿಯೇ ಇದ್ದು, ಪುನೀತ್ ರವರ ಜತೆ ಕೇಕ್ ಕತ್ತರಿಸುತ್ತಿದ್ದರು. ಆದರೆ, ಈ ಬಾರಿ ಪುನೀತ್ ರವರ ಜತೆ ಬರ್ತ್ಡೇ ಆಚರಿಸಿಕೊಳ್ಳೋಕೆ ಅವರು ನಮ್ಮ ಜೊತೆ ಇಲ್ಲ. ಈಗ ಪುನೀತ್ ಮನೆಯ ಬಳಿ ಬರಬೇಡಿ ಒಂದು ಹೇಳಿದ ಹಳೇ ವಿಡಿಯೋ ವೈರಲ್ ಆಗಿದೆ.

‘ಮಾರ್ಚ್ 16ರ ಮಧ್ಯರಾತ್ರಿ ಯಾರೂ ಮನೆ ಸಮೀಪ ಬರಬೇಡಿ. ನಾನು ಊರಲ್ಲಿ ಇರುವುದಿಲ್ಲ. ಮಾರ್ಚ್ 17ರ ಬೆಳಗ್ಗೆ ಬರುತ್ತೇನೆ’ ಎಂದು ಪುನೀತ್ ರಾಜ್ ಕುಮಾರ್ ಹೇಳಿದ್ದರು.ಇದೀಗ ಪುನೀತ್ ರವರು ಮಾತನಾಡಿದ ವಿಡಿಯೋ ಕೊನೆಯಲ್ಲಿ ಅಭಿಮಾನಿಗಳ ಕಣ್ಣೀರು ಇಡುವುದನ್ನು ಸೇರಿಸಲಾಗಿದ ವಿಡಿಯೋ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿಕೊಂಡಿದೆ ವಾಟ್ಸಪ್ ಸ್ಟೇಟಸ್, ಫೇಸ್ಬುಕ್ಸ್ ಸೇರಿದೆ ಹಲವು ಕಡೆ ಅಭಿಮಾನಿಗಳು ವಿಡಿಯೋದ ಜೊತೆಗೆ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.


Spread the love