Spread the love

ಪಾವಗಡ : ದಿನಾಂಕ 3.11.2022 ರಂದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕ್ಷೇತ್ರದ ಬೆಳವಣಿಗೆಗಳನ್ನು ಮತ್ತು ಯುವ ಕಾರ್ಯಕರ್ತರನ್ನು ಉದ್ದೇಶಿಸಿ ನಡೆಯುತ್ತಿದ್ದ ಸಭೆ ಹಾಗೂ ಬೈಕ್ ರ್ಯಾಲಿಗೆ . ಕರ್ನಾಟಕ ರಾಜ್ಯ ಯುವ ಜನತಾದಳದ ರಾಜ್ಯಾಧ್ಯಕ್ಷರಾದ ಶ್ರೀಯುತ ನಿಖಿಲ್ ಕುಮಾರಸ್ವಾಮಿ ಅವರ ಆಗಮಿಸ ಬೇಕಿದ್ದು. ಸಂಬಂಧಪಟ್ಟ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ನಡೆದಿದ್ದರೂ ಅವಮಾನ ವೈಫಲ್ಯತೆಗಳಿಂದ ನಿಖಿಲ್ ರವರು ಕ್ಷೇತ್ರಕ್ಕೆ ತಮ್ಮ ಭೇಟಿಯನ್ನು ರದ್ದುಪಡಿಸಿದ್ದಾರೆ. ಈ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಮುತ್ತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಕೆ. ಎಂ ತಿಮ್ಮರಾಯಪ್ಪನವರು ” 03-11- 2022 ರಂದು ಯುವ ಜನತಾದಳದ ರಾಜ್ಯ ಅಧ್ಯಕ್ಷರಾದ ಶ್ರೀಯುತ ನಿಖಿಲ್ ಕುಮಾರಸ್ವಾಮಿ ಅವರು ಪಾವಗಡ ಕ್ಷೇತ್ರ ಬೇಟಿ ಕಾರ್ಯಕ್ರಮ ನಿಶ್ಚಿತವಾಗಿತ್ತು. ಆದರೆ ಅವಮಾನ ವೈಫಲ್ಯತೆಗಳು ಸೇರಿದಂತೆ ಹಲವು ಕಾರಣಗಳಿಂದ ಅವರ ಭೇಟಿ ರದ್ದಾಗಿದ್ದು. ಕಾರ್ಯಕರ್ತರು ಈ ವಿಚಾರವಾಗಿ ನಿರಾಶೆಗೊಳಗಾಗದೆ ಪ್ರಸ್ತುತ ಪರಿಸ್ಥಿತಿಯನ್ನು ಧನಾತ್ಮಕವಾಗಿ ಅರ್ಥೈಸಿಕೊಳ್ಳುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು ಹಾಗೂ ಮುಂದಿನ ದಿನಗಳಿಗೆ ಈ ಸಭೆಯನ್ನು ರೂಪಿಸುವ ಯೋಜನೆಯ ಇದ್ದು ಈ ಬಗ್ಗೆ ಎಲ್ಲಾ ಕಾರ್ಯಕರ್ತರು ಸಹಕರಿಸಬೇಕಾಗಿ ತಿಳಿಸಿದರು.

ವರದಿ : ಅಜಿತ್ ಕುಮಾರ್ ಬೆಳ್ಳಿಬಟ್ಲು ಓ


Spread the love