Spread the love

ವಿಜಯಪುರ : ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಪ್ರಬಲ ಅಭ್ಯರ್ಥಿಯಾಗಿ ,ವಕೀಲರು ಹಾಗೂ ದಲಿತ ಮುಖಂಡರಾದ ಶ್ರೀ ಯುತ ಶ್ರೀನಾಥ್ ಪೂಜಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯುವ ಸಲುವಾಗಿ ನೆನ್ನೆ KPCC ಕೇಂದ್ರ ಕಛೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ತೆರಳಿ ಅರ್ಜಿ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಹಲವು ಸಮಾಜ ಸೇವೆ ಕಾರ್ಯಗಳಿಂದ ತಮ್ಮನ್ನು ತಾವು ಗುರುತಿಸಿಕೊಂಡಂತಹ ಇವರಿಗೆ ಅ ಮತಕ್ಷೇತ್ರದ ಜನರು ಸಮಾಜಕ ಜಾಲತಾಣಗಳ ಮೂಲಕ ಶುಭ ಹರಿಸಿದ್ದಾರೆ. ಅಲ್ಲೆದೆ ಇವರ ರಾಜಕೀಯ ಪ್ರವೇಶದಿಂದ ಅಭಾಗದ ಕ್ಷೇತ್ರದಲ್ಲಿ ಅನೇಕ ರಾಜಕೀಯ ಗೊಂದಲಗಳು , ಏರುಪೇರುಗಳು ಸೃಷ್ಟಿಯಾಗಿದ್ದಾವೆ ಎಂದು ಕೇಳಿಬರುತ್ತದೆ . ಪ್ರಸ್ತುತ ಕಾಂಗ್ರೆಸ್ ರಾಷ್ಟ್ರೀಯ ನಾಯಕರೊಂದಿಗೆ ಉತ್ತಮವಾದ ಸಂಪರ್ಕ ಹೊಂದಿರುವಂತಹ ಶ್ರೀನಾಥ್ ಪೂಜಾರಿ ರವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ದೊರೆಯುವುದು ಖಚಿತ ಎಂಬ ಮಾತುಗಳು ಸಹ ಕೇಳಿಬರುತ್ತಿದ್ದು . ವಿದ್ಯಾರ್ಥಿ ಜೀವನದಿಂದಲೇ ರಾಜಕೀಯ ಅರಿವನ್ನು ಬಿಡಿಸಿಕೊಂಡು ಬಂದಂತಹ ಇವರು ಹಿಂದೊಮ್ಮೆ ವಿಜಯಪುರ ಕ್ಷೇತ್ರದ ಲೋಕ ಸಭಾ ಚುನಾವಣೆಯಲ್ಲೂ BSP ಅಭ್ಯರ್ಥಿಯಾಗಿ ಸ್ಪರ್ಧಿಸಿ 23,442 ಮತಗಳನ್ನು ಗಳಿಸು ರಾಜಕೀಯ ಸಂಚಲನವನ್ನು ಮೂಡಿಸಿದ್ದರು. ಇದೀಗ ಇವರು ಮತ್ತೆ ರಾಜಕೀಯ ಪ್ರವೇಶದಿಂದ ಮತ್ತಷ್ಟು ರಾಜಕೀಯ ಬದಲಾವಣೆಗಳಗಳಿವೆ ಎಂದು ತಿಳಿದು ಬಂದಿದೆ.


Spread the love

By admin