Spread the love

ಹೈದರಾಬಾದ್: ಜನರಲ್ ಕೌನ್ಸಿಲ್ ಆಫ್ ಸಿಖ್ಸ್​ ಫಾರ್ ಜಸ್ಟಿಸ್ ಸಂಘಟನೆಯ ಗುರ್ಪತವಂತ್ ಸಿಂಗ್ ಪನ್ನು ಪಂಜಾಬ್ ರಾಜ್ಯದ ಜನತೆಯ ಪರವಾಗಿ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.

ಈ ಆಡಿಯೊಗೆ ಖೂನ್ ದಾ ಬದ್ಲಾ ಖೂನ್ (ರಕ್ತದ ಪ್ರತೀಕಾರ ರಕ್ತದಿಂದ) ಎಂದು ಶೀರ್ಷಿಕೆ ನೀಡಲಾಗಿದೆ. ಇದರಲ್ಲಿ 1955 ರಿಂದ 1984 ರ ಅವಧಿಯ ಗಾಂಧಿ-ನೆಹರು ಕುಟುಂಬದ ಆಡಳಿತವನ್ನು ನೆನಪಿಸಲಾಗಿದೆ.

ಎಸ್​ಎಫ್​ಜೆ ಜನರಲ್ ಕಾನ್ಸುಲ್ ಆಗಿರುವ ಗುರ್ಪತವಂತ್ ಸಿಂಗ್ ಪನ್ನು ಸಿಖ್ ಇತಿಹಾಸದ ಬಗ್ಗೆ ರಾಹುಲ್ ಗಾಂಧಿಯವರಿಗೆ ನೆನಪಿಸಿ ಕೊಟ್ಟಿದ್ದು, ದರ್ಬಾರ್ ಸಾಹಿಬ್ ಮೇಲೆ ದಾಳಿ ಮಾಡಿದವರ ವಂಶವನ್ನೇ ನಿರ್ನಾಮ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿ ಮಾತ್ರ ಜೀವಂತವಿದ್ದಾರೆ ಎಂದು ಆಡಿಯೋ ಮೆಸೇಜ್​ನಲ್ಲಿ ಹೇಳಲಾಗಿದೆ. ಕಾಶ್ಮೀರಿ ಹೋರಾಟಗಾರರ ನೆರವಿನಿಂದ ತಾವು ರಾಹುಲ್ ಗಾಂಧಿಯವರ ಅಮೃತಸರ್​ನಿಂದ ಶ್ರೀನಗರದವರೆಗಿನ ಪ್ರಯಾಣವನ್ನು ಯೋಜಿಸುತ್ತಿರುವುದಾಗಿ ಹೇಳಿದ್ದಾರೆ. ಲಾಲ್​ ಚೌಕ್​ನಲ್ಲಿ ರಾಷ್ಟ್ರಧ್ವಜ ಹಾರಿಸಲು ರಾಹುಲ್ ಗಾಂಧಿಗೆ ಅವಕಾಶ ನೀಡಲ್ಲ ಎಂದು ಹೇಳಿದ್ದಾರೆ.


Spread the love

By admin