Spread the love

ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ತೀವ್ರತರದ ಚಳಿ ಜನರನ್ನು ತತ್ತರಿಸುವಂತೆ ಮಾಡಿದೆ. ನಿತ್ಯ ವಾಕಿಂಗ್ ಹೋಗುತ್ತಿದ್ದವರು ಅದನ್ನು ಕೈ ಬಿಡುವಂತಾಗಿದ್ದು, ಆದರೆ ಪತ್ರಿಕೆ ವಿತರಕರು, ಹಾಲು ವಿತರಿಸುವವರು ಮೊದಲಾದ ಕೆಲಸದಲ್ಲಿರುವವರಿಗೆ ಈ ಚಳಿ ಇನ್ನಿಲ್ಲದಂತೆ ಕಾಡುತ್ತಿದೆ.

 

ಇದರ ಮಧ್ಯೆ ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಚಳಿ ಮುಂದುವರಿಯಲಿದೆ ಎನ್ನಲಾಗಿದ್ದು, ಜನರನ್ನು ಮತ್ತಷ್ಟು ಮೈ ನಡುಗುವಂತೆ ಮಾಡಿದೆ. ಹಲವು ಜಿಲ್ಲೆಗಳಲ್ಲಿ ತಾಪಮಾನ ಹತ್ತು ಡಿಗ್ರಿ ಗಳಿಗಿಂತಲೂ ಕಡಿಮೆಯಿದ್ದು, ಜನ ಹೊರಬರಲು ಹಿಂದೇಟು ಹಾಕುವಂತಾಗಿದೆ.

ಚಳಿಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಟೋಪಿ, ಸ್ವೆಟರ್, ಜಾಕೆಟ್ ಮೊದಲಾದವುಗಳ ಮೊರೆ ಹೋಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಜನ ಬೆಂಕಿ ಹಾಕಿಕೊಂಡು ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಸಂಕ್ರಾಂತಿ ಬಳಿಕ ಚಳಿ ಕಡಿಮೆಯಾಗಬೇಕಿತ್ತಾದರೂ ಇನ್ನೂ ವಾರಗಳ ಕಾಲ ಮುಂದುವರಿಯಲಿದೆ ಎಂದು ಹೇಳಲಾಗಿದೆ.


Spread the love

By admin