Spread the love

ಕೋಲಾರ: ಹಣಕ್ಕಾಗಿ ನಾವು ಬಿಜೆಪಿಗೆ ಹೋಗಿಲ್ಲ ಎನ್ನುವುದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಗೊತ್ತು. ರಾಜಕೀಯಕ್ಕಾಗಿ ಈಗ ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಗುಡುಗಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಸಚಿವ ಸುಧಾಕರ್, ಜೆಡಿಎಸ್ ಜೊತೆಗಿನ ಕಾಂಗ್ರೆಸ್ ಅನೈತಿಕ ಸಂಬಂಧಕ್ಕೆ ಬೇಸತ್ತು ನಾವು ಬಿಜೆಪಿಗೆ ಹೋಗಿದ್ದು.

ಹಣದ ಆಸೆಯಿಂದ ಬಿಜೆಪಿ ಸೇರಿಲ್ಲ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಲ್ಲಿ ಮೂರು ಸಾವಿರ ಕೋಟಿ ಹಗರಣ ಆಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆರೋಗ್ಯ ಇಲಾಖೆಯ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಕೊಡುತ್ತೇನೆ. ಸಿಎಜಿ ವರದಿ ಏನು ಉಲ್ಲೇಖ ಮಾಡಿದೆ ಎಂಬುದನ್ನೂ ನಾಳೆ ಹೇಳುತ್ತೇನೆ. ನಾನು ಹಗರಣ ಮಾಡಿದ್ದರೆ ಪಬ್ಲಿಕ್ ನಲ್ಲಿ ನೇಣಿಗೆ ಹಾಕಿ ಎಂದು ತಿರಿಗೇಟು ನೀಡಿದರು.


Spread the love

By admin