Spread the love

ಚಿಕ್ಕಬಳ್ಳಾಪುರ: “ನನಗೆ ಚಿಕ್ಕಬಳ್ಳಾಪುರದ ಜನತೆಯೇ ಬಿಗ್‌ಬಾಸ್‌. ಅನಾಥ ಎಂದು ಹೇಳಿಕೊಂಡೇ ಲಾಟರಿ ಶಾಸಕರಾಗಿ, ಜನರನ್ನು ಅನಾಥರನ್ನಾಗಿ ಮಾಡಿ ಬಿಗ್‌ಬಾಸ್‌ಗೆ ಹೋದವರಿಗೆ ನಾಚಿಕೆಯೇ ಇಲ್ಲ. ನಾನು ಪರಿಶ್ರಮ ಎಂದು ಇಪ್ಪತ್ತು, ಮೂವತ್ತು ಕಾಲೇಜು ಮಾಡಿಕೊಳ್ಳಲು ಬಂದಿಲ್ಲ. ಕ್ಷೇತ್ರದ ಜನರ ಹಿತವೇ ನನಗೆ ಮುಖ್ಯ” ಎಂದು ಶಾಸಕ ಪ್ರದೀಪ್‌ ಈಶ್ವರ್‌ ವಿರುದ್ಧ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಕಿಡಿ ಕಾರಿದರು.

ನಗರದಲ್ಲಿ ಮಾತನಾಡಿದ ಅವರು, ಸತ್ಯವೇ ಹೇಳದವರನ್ನು ಇಲ್ಲಿನ ಜನರು ಶಾಸಕರನ್ನಾಗಿ ಮಾಡಿದ್ದಾರೆ. ನಾನು ಜನರ ಹೃದಯದಲ್ಲಿ ಇರಲು ಬಂದಿದ್ದೇನೆಯೇ ಹೊರತು, ದುಡ್ಡು ಮಾಡಲು ಅಲ್ಲ. ವೋಟಿನ ಮೂಲಕ ಅವರು ಗೆದ್ದಿರಬಹುದು. ಆದರೆ ನಾನು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಹೃದಯ ಗೆಲ್ಲುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ನನ್ನ ತಾಯಿಯ ಹೆಸರಿನಲ್ಲಿ 15 ವರ್ಷದಿಂದ ಕಾಲೇಜು ನಡೆಸಿ ಶಿಕ್ಷಣ ನೀಡುತ್ತಿದ್ದೇನೆ. ರಾಜಕಾರಣಕ್ಕೆ ಬರುವ ಮುನ್ನವೇ ಈ ಕ್ಷೇತ್ರದ 15 ಸಾವಿರ ವಿದ್ಯಾರ್ಥಿಗಳಿಗೆ ಐದು ವರ್ಷ ಉಚಿತ ಬಸ್‌ಪಾಸ್‌ ನೀಡಿದ್ದೇನೆ. ನನ್ನ ಇತಿಹಾಸವನ್ನು ತಿಳಿದುಕೊಂಡು ಮಾತನಾಡಲಿ. ಪರಿಶ್ರಮ ಎಂದು ಇಪ್ಪತ್ತು ಮೂವತ್ತು ಕಾಲೇಜುಗಳನ್ನು ಮಾಡಿಕೊಳ್ಳಲು ಬಂದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಏನು ಬೇಕಾದರೂ ಮಾಡುತ್ತೇನೆ ಎಂದರು.

 


Spread the love