Spread the love

ಬೆಂಗಳೂರು;- ಗೃಹಲಕ್ಷ್ಮೀ ಫಲಾನುಭವಿಗಳಿಗೆ ಹಣ ತಲುಪದ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಈಗ 9.44 ಲಕ್ಷ ಜನರದ್ದು ಪೆಂಡಿಗ್ ಇದೆ. ಅ.12 ಈ ಕುರಿತು ಡಾಟಾ ತಗೆದುಕೊಳ್ಳುತ್ತೇನೆ. ಈಗಾಗಲೇ 1 ಕೋಟಿ ಜನರ ಕುಟುಂಬಕ್ಕೆ ಹೋಗಿದೆ. ನಮ್ಮ ಟಾರ್ಗೆಟ್ ಇರುವುದು 1 ಕೋಟಿ 15 ಲಕ್ಷ ಎಂದರು.

ಇನ್ನೂ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಂತೆ ಬಹುಮತದೊಂದಿಗೆ ರಾಜ್ಯದ ಆಡಳಿತ ಚುಕ್ಕಾಣಿ ಕೂಡ ಹಿಡಿದಿತ್ತು. ಇನ್ನು ಮೊದಲೆ ಭರವಸೆ ಕೊಟ್ಟಿದ್ದಂತೆ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಿದೆ.


Spread the love