Spread the love

ಹಾಸನ: ಮೊಬೈಲ್ ಕದ್ದ ಆರೋಪದ ಮೇಲೆ ಪೊಲೀಸ್ ಕಾನ್ಸ್‌ಟೇಬಲ್‌ ಬಾಲಕನ‌ ಮೇಲೆ ಹಲ್ಲೆ ನಡೆಸಿದ್ದು ಬಾಲಕ ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎಂಟನೇ ತರಗತಿ ವಿದ್ಯಾರ್ಥಿ ಪ್ರೀತಂ (14) ಹಲ್ಲೆಗೊಳಗಾದ ಬಾಲಕ. ಹಾಸನದ ಬೇಲೂರು ತಾಲೂಕಿನ ಮುಂಡುಗಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾಸ್ಟೆಲ್‌ನಲ್ಲಿ ಓದಿಕೊಂಡಿದ್ದ ಪ್ರೀತಂ ರಜೆ ಇದ್ದಿದ್ದರಿಂದ ತನ್ನ ಅಜ್ಜಿಯ ಮನೆಗೆ ಬಂದಿದ್ದ. ಈ ವೇಳೆ ಸಂಬಂಧಿಕರ ಮದುವೆ ಹಿನ್ನೆಲೆ ಪ್ರೀತಂ ಕೂಡ ಮದುವೆಗೆ ಬಂದಿದ್ದ.

ಮದುವೆ ಮನೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಶಾಲಿನಿ ಮೊಬೈಲ್ ಕಳ್ಳತನವಾಗಿದೆ. ಪತ್ನಿ ಮೊಬೈಲ್ ಕಾಣೆಯಾದ ಬಗ್ಗೆ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ಶಾಲಿನಿ ಪತಿ ಜಗದೀಶ್ ಬಾಲಕನನ್ನು ಕರೆದು ಮೊಬೈಲ್ ಕದ್ದ ಬಗ್ಗೆ ವಿಚಾರಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಜಗದೀಶ್ ಮದುವೆ ದಿನ ಮೊಬೈಲ್ ಕಾಣೆಯಾಗಿದ್ದರಿಂದ ಬಾಲಕ ಪ್ರೀತಂ ಮೊಬೈಲ್ ಕದ್ದಿರೋ ಅನುಮಾನದಿಂದ ವಿಚಾರಣೆ ಮಾಡಿದ್ದಾರೆ.


Spread the love

By admin