Spread the love

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಕಣ್ಣು ಬಿದ್ದಿದ್ದು , ಫೆಬ್ರವರಿ ತಿಂಗಳ ಕೊನೆಯಲ್ಲಿ ಪಾಲಿಕೆ ಮೇಲೆ ದಾಳಿ ನಡೆಸಿದ ಎಸಿಬಿ ಪಾಲಿಕೆಯ ಹಲವು ಕಡತಗಳನ್ನು ವಶಪಡಿಸಿಕೊಂಡಿತ್ತು . ಭ್ರಷ್ಟಾಚಾರದ ವಾಸನೆ ಬಂದ ಕಡೆಯಲ್ಲ ತಮ್ಮ ಕಾರ್ಯಾಚರಣೆ ಚುರುಕು ಗೊಳಿಸಿತು, ಈಗಲೂ ಬಿಬಿಎಂಪಿ ಕಡತ ಪರಿಶೀಲನೆಯನ್ನು ಮುಂದುವರೆಸಿದ ಎಸಿಬಿ ಗೆ ಅನೇಕ ದೂರುಗಳ ಸುರಿಮಳೆಯೇ ಹರಿದು ಬರುತ್ತಿವೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಈ ನೂರಾರು ಸಂಖ್ಯೆಯಲ್ಲಿನ ದೂರುಗಳು ಮುಖ್ಯವಾಗಿ ಟಿಡಿಆರ್ (TDR) , ಡಿಆರ್ಸಿ ( DRC ) ಗೆ ಸಂಬಂಧಪಟ್ಟಿವೆ ಎಂದು ಎಸಿಬಿ ವಲಯದಿಂದ ಮಾಹಿತಿ ಲಭ್ಯವಾಗಿದೆ.

ಇದೀಗ ಎಸಿಬಿ 2018 ರಿಂದ 2022 ರ ವರೆಗಿನ ತೆರಿಗೆ ವಂಚನೆ ಸಂಬಂಧಿಸಿದ ಮಾಹಿತಿ ಕಲೆಹಾಕುತ್ತಿದ್ದು , ಟ್ಯಾಕ್ಸ್ ವಿಭಾಗದಲ್ಲಿ ಯೇ ಸರಿಸುಮಾರು ” 1 ಸಾವಿರ ಕೋಟಿ ” ತೆರಿಗೆ ವಂಚನೆ ಆಗಿರುವ ಬಗ್ಗೆ ಎಸಿಬಿ ಮಾಹಿತಿ ನೀಡಿದೆ , ಯಾವ ಚಿಕ್ಕ ಪುಟ್ಟ ವಿಷಯಗಳನ್ನು ಈ ವಿಚಾರದಲ್ಲಿ ಕೇವಲವಾಗಿ ಪರಿಗಣಿಸಬಾರದು ಎಂದು ಎಸಿಬಿ ಪಣತೊಟ್ಟಿದೆ. ನಗರ ಯೋಜನೆ ( ಟೌನ್ ಪ್ಲಾನಿಂಗ್ ) ಮತ್ತು ಟ್ಯಾಕ್ಸ್ ಸೆಕ್ಷನ್ ( ತೆರಿಗೆ ವಿಭಾಗ ) ವನ್ನು ಸೇರಿಸಿ ಕಡತಗಳ ಪರಿಶೀಲನೆಗೆ ಮುಂದಾಗಿದೆ.

ಪ್ರಮುಖವಾಗಿ ತೆರಿಗೆ ವಂಚನೆಯ ಬಗ್ಗೆ ವಿಶೇಷವಾಗಿ ಗಮನ ಹರಿಸಿರುವ ಎಸಿಬಿ. 10 ಅಂತಸ್ತಿನ ಕಟ್ಟಡಗಳಿಗಿಂತಲೂ ಹೆಚ್ಚು ಮಹಡಿಗಳುಳ್ಳ ಕಟ್ಟಡಗಳನ್ನು ಟಾರ್ಗೆಟ್ ಇಟ್ಟುಕೊಂಡು ಎರಡು ಏಕರೆಗು ಹೆಚ್ಚು ಜಾಗದಲ್ಲಾದ ಗೋಲ್ಮಾಲ್ ಗಳನ್ನೆ ಸ್ಕೂಟ್ನಿ ಮಾಡ್ತಿದೆ. ಈವರೆಗೂ ದೊರೆತಿರುವ ಮಾಹಿತಿ ಪ್ರಕಾರ ಮಾರತ್ತಹಳ್ಳಿ, ವೈಟ್ ಫೀಲ್ಡ್ , ಎಚ್ ಎಸ್ ಆರ್ ಲೇಔಟ್ , ಮಹದೇವಪುರ , ಬೊಮ್ಮನಹಳ್ಳಿ ಭಾಗದಲ್ಲಿ ದೊಡ್ಡ ದೊಡ್ಡ ಕಟ್ಟಡದ ಮಾಲೀಕರಿಂದಲೇ ತೆರಿಗೆ ವಂಚನೆಯಾಗಿದೇ ಎಂದು ತಿಳಿದು ಬಂದಿದೆ.

ಈ ತೆರಿಗೆ ವಂಚಿತ ಮಾಲೀಕರು ಹಾಗೂ ಬಿಲ್ಡರ್ ಗಳಿಗೆ, ಸರ್ವೆ ಇಂಜಿನಿಯರ್ ಗಳ ಕುಮ್ಮಕ್ಕಿದ್ದು ಅವರ ಸಹಾಯದಿಂದಲೇ ಕಟ್ಟಡದ ಮಾಲೀಕರು ಟ್ಯಾಕ್ಸ್ ವಂಚನೆ ಮಾಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಎಸಿಬಿ ದಾಳಿ ಮಾಡಿದ ದಿನದಿಂದಲೇ ತೆರಿಗೆ ವಂಚಕರಿಗೆ ಸಹಾಯ ಮಾಡಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ನಡುಕ ಶುರುವಾಗಿದ್ದು , ಸದ್ಯದಲ್ಲೇ ಎಸಿಬಿ ಅಧಿಕಾರಿಗಳು ನಿಜವಾದ ಮುಖ ಏನು ಎಂದು ಬಯಲಿಗಳೆದಿದ್ದಾರೆ ಎಂಬ ನಿರೀಕ್ಷೆಯಲ್ಲಿ ಸಮಾಜ ಕಾದುನಿಂತಿದೆ.


Spread the love