Spread the love

ಬೆಂಗಳೂರು ನಗರದ ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯ ಚಂದ್ರ ನಗರ ಪಾರ್ಕ್ ಪೈಪ್ಲೈನ್ ನಲ್ಲಿರುವ “ವಿಶ್ವ ರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ” ಪುತ್ಥಳಿಯನ್ನು BWSSB ಅಧಿಕಾರಿಗಳಾದ AEE ಹೇಮಂತ್ ಕುಮಾರ್ ಕುಮ್ಮಕ್ಕಿನಿಂದ ಸಹಾಯಕ ನೌಕರರಾದ ಪುಟ್ಟಸ್ವಾಮಿ , BBMP ಯ ನೌಕರರವೆಂದು ಹೇಳುವ ನಕಲಿ ನೌಕರರಾದ ಪ್ರಸನ್ನ ಹಾಗೂ ಇನ್ನಿತರರ ಸಹಾಯದೊಂದಿಗೆ 04 – 04 – 2022 ರ ಸಂಜೆ 5:00 ಗಂಟೆಗೆ ಮೇಲ್ಕಾಣಿಸಿದ ನೌಕರರ ಗುಂಪು ಪುತ್ತಳಿಯು ಅನಧಿಕೃತ ಸ್ಥಳದಲ್ಲಿ ಇದೆ ಎಂದು ಕ್ಷುಲ್ಲಕ ಕಾರಣ ನೀಡಿ ಅಲ್ಲಿ ಯಾರು ಸುಳಿವು ಇಲ್ಲದ ಸಂದರ್ಭವನ್ನು ಗೊತ್ತುಮಾಡಿಕೊಂಡು ಪುತ್ತಳಿಯನ್ನು ವಿಕೃತ ಗೊಳಿಸಿ ತೆಲುಗು ಮಾಡಲು ಮುಂದಾಗಿದ್ದಾರೆ . ಇದನ್ನು ಕಂಡ ಸ್ಥಳೀಯ ಸಮತಾ ಸೈನಿಕ ದಳ ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಆ ಕೃತ್ಯವನ್ನು ಪ್ರಶ್ನಿಸಿದಾಗ ಬೆಪ್ಪಾದ ಅಧಿಕಾರಿಗಳು ಹಲವು ಅಯೋಗ್ಯ ಹೇಳಿಕೆಗಳನ್ನು ನೀಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ . ಇದನ್ನು ಸೂಕ್ಷ್ಮವಾಗಿ ಗಮನಿಸಿದ SSD ಮತ್ತು RPI ಕಾರ್ಯಕರ್ತರು ಕುಮಾರಸ್ವಾಮಿ ಬಡಾವಣೆ ಪೊಲೀಸ್ ಠಾಣೆಗೆ ಕೃತ್ಯಕ್ಕೆ ಪಾಲಾದ ಎಲ್ಲ ವ್ಯಕ್ತಿಗಳ ಮೇಲೆ ದೂರು ನೀಡಿದ್ದು ಪ್ರತಿಯನ್ನು ಉಪ ಪೊಲೀಸ್ ಆಯುಕ್ತರು ಬೆಂಗಳೂರು ದಕ್ಷಿಣ ವಿಭಾಗ ಮತ್ತು ಸಹಾಯಕ ಪೊಲೀಸ್ ಆಯುಕ್ತರು ಉಪವಿಭಾಗ ಬೆಂಗಳೂರು ನಗರ ಇವರಿಗೆ ದೂರಿನ ಅರ್ಜಿಗಳನ್ನು ಸಲ್ಲಿಸಿದ್ದು ಕೃತ್ಯವೆಸಗಿದ್ದವರ ಮೇಲೆ ಗುಂಡಾಗಿರಿ ಕೇಸು ದಾಖಲಿಸುವಂತೆ ಮತ್ತು ಅಂಬೇಡ್ಕರ್ ಅವರ ಪುತ್ತಳಿಗೆ ಸೂಕ್ತ ರೀತಿಯ ರಕ್ಷಣೆ ಒದಗಿಸುವಂತೆ ದೂರಿನಲ್ಲಿ ದಾಖಲಿಸಿದ್ದಾರೆ. ಸಧ್ಯಕ್ಕೆ ಈ ವಿವಾದ ವಿಚಾರಣೆಯ ಹಂತದಲ್ಲಿದೆ.

ವರದಿ :✍️ #ಅಗ್ನಿ ಅಜಿತ್


Spread the love