Spread the love

ತುಮಕೂರು : ಹೊಸದುರ್ಗ ಪಾಳ್ಳೇಗಾರರು ಎಂಬ ವಿಶೇಷವಾದ ಪ್ರಬಂಧಕ್ಕೆ ಡಾ.ದಿನೇಶ್‍ಕುಮಾರ್.ಪಿ.ಎನ್. ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದೆ.
ಡಾ.ದಿನೇಶ್‍ಕುಮಾರ್ ಪಿ.ಎನ್.ಅವರು ಡಾ.ಪ್ರಿಯಾಠಕೂರ್ ಮಾರ್ಗದರ್ಶನದಲ್ಲಿ “ಹೊಸದುರ್ಗ ಪ್ರದೇಶದ ಪಾಳ್ಳೇಗಾರರು” ಎಂಬ ವಿಷಯದಲ್ಲಿ ತುಮಕೂರು ವಿ.ವಿ.ಪುರಾತತ್ವ ಸಂಶೋಧನಾ ವಿಭಾಗದಲ್ಲಿ ಅಧ್ಯಯನ ಮಾಡಿದ್ದರು.
ಪಾಳ್ಳೇಗಾರರು ಸುಮಾರು 18ನೇ ಶತಮಾನದಲ್ಲಿ ವಿಜಯನಗರ ಅರಸರ ಅಧೀನದಡಿಯಲ್ಲಿ ಆಳ್ವಿಕೆ ಮಾಡಿದ್ದು ಇಂತಹ ಪಾಳ್ಳೇಗಾರರಲ್ಲಿ ಹಾಗಲವಾಡಿಯ ಶಿರಮನಾಯಕ ಎಂಬ ಪಾಳ್ಳೇಗಾರನು ತುಂಬಾ ಹೆಸರು ಪಡೆದ ಪಾಳ್ಳೇಗಾರನಾಗಿದ್ದ, ಈ ಹಿನ್ನಲೆಯಲ್ಲಿಯೇ 18ನೇ ಶತಮಾನದಿಂದಲೇ ಹಾಗಲವಾಡಿ ತುಂಬಾ ಯಶಸ್ವಿಯಾದ ಪಾಳೇಪಟ್ಟು ಕೇಂದ್ರ ಎನ್ನಿಸಿಕೊಂಡಿತ್ತು.
ಹೊಸದುರ್ಗ ಪ್ರದೇಶದ ಪಾಳ್ಳೇಗಾರರು ಕಂದಾಯ ಸಂಗ್ರಹಿಸಿ ವಿಜಯನಗರ ಅರಸರಿಗೆ ನೀಡುವುದಲ್ಲದೆ, ವಿಜಯನಗರ ಅರಸರು ಹೇಳಿದಂತೆ ಆಡಳಿತವನ್ನು ಮಾಡಬೇಕಿತ್ತು, ಕಂದಾಯ ಕೊಡದ, ಹೇಳಿದಂತೆ ಕೇಳದ ಪಾಳ್ಳೇಗಾರರನ್ನು ವಿಜಯನಗರ ಅರಸರು ಅ ಸ್ಥಾನದಿಂದ ಅವರನ್ನು ವಜಾಗೊಳಿಸಿ ಬೇರೆಯವರನ್ನು ನೇಮಿಸುತ್ತಿದ್ದರು, ಯಾವುದೇ ತಿರ್ಮಾನ ತೆಗೆದುಕೊಳ್ಳುವಾಗಲೂ ವಿಜಯನಗರ ಸಂಸ್ಥಾನಕ್ಕೆ ಅಧೀನದಲ್ಲಿದ್ದಕೊಂಡು ವಿಜಯನಗರ ಅರಸರ ನಿರ್ದೇಶನದಂತೆ ಆಡಳಿತ ಮಾಡಬೇಕಿತ್ತು.

ಇದಲ್ಲದೆ ಈ ಪಾಳ್ಳೇಗಾರರಿಗೆ ಸ್ವತಂತ್ರವಾಗಿ ಕೋಟೆ ಕಟ್ಟುವ, ಅಧಿಕಾರವೂ ಇರಲಿಲ್ಲ, ಯುದ್ಧ ಕಾಲದಲ್ಲಿ ಈ ಪಾಳ್ಳೇಗಾರರು ಇಂತಿಷ್ಟು ಎಂದು ಸೈನಿಕರನ್ನು ಕಳಿಹಿಸುವುದಲ್ಲದೆ, ಯುದ್ಧದ ಮುಖಂಡತ್ವವನ್ನು ಸಹ ವಹಿಸಬೇಕಿತ್ತು.
ಡಾ.ದಿನೇಶ್‍ಕುಮಾರ ಪಿ.ಎನ್. ಡಾಕ್ಟರೇಟ್ ಪಡೆದ ಹೊಸದುರ್ಗ ಪ್ರದೇಶದ ಪಾಳ್ಳೇಗಾರರು ಎಂಬ ಪಿ.ಹೆಚ್.ಡಿ. ವಿಷಯದಲ್ಲಿ ಪಾಳ್ಳೇಗಾರರ ಹಿನ್ನಲೆ, ಆಡಳಿತ, ಆ ಪ್ರದೇಶದ ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಸ್ಥಿತಿಗತಿಗಳನ್ನು ಮತ್ತು ಬೆಲಗೂರು, ಹಾಗಲವಾಡಿ, ಹೊಸದುರ್ಗ ಪ್ರಾಂತದಲ್ಲಿ ಬರುವ ದೇವಸ್ಥಾನ, ಮಾಸ್ತಿ ಕಲ್ಲುಗಳ ಬಗ್ಗೆ ಬೆಳಕು ಚೆಲ್ಲಿ ಅನೇಕ ವಿಷಯವನ್ನು ತಮ್ಮ ಪ್ರಬಂಧದಲ್ಲಿ ದಾಖಲಿಸಿದ್ದಾರೆ.

ಡಾಕ್ಟರೇಟ್ ಪಡೆದ ಡಾ.ದಿನೇಶ್‍ಕುಮಾರ ಪಿ.ಎನ್. ಅವರು “ಪ್ರತಿಭಟನೆ ನ್ಯೂಸ್‍ನೊಂದಿಗೆ” ಮಾತನಾಡಿ ಈ ಸಮಾಜದಲ್ಲಿ ಇಂದು ತುಳಿತಕ್ಕೆ ಒಳಪಟ್ಟ ಸಮುದಾಯ ಹಿಂದೊಂದು ದಿನ ರಾಯಬಾರದ ಆಳ್ವಿಕೆ ಮಾಡಿತ್ತು. ಮತ್ತು ಕೆಲವು ಬುಡಕಟ್ಟು ಸಂಸ್ಕೃತಿಯನ್ನು ತನ್ನೊಂದಿಗೆ ಕಾಪಾಡಿಕೊಂಡು ಬಂದಿತ್ತು ಇಂತ ಇತಿಹಾಸವನ್ನು ಉಳಿಸಬೇಕು ಮತ್ತು ಮುಖ್ಯವಾಗಿ ಪಾಳ್ಳೇಗಾರರ ಕಾಲದಲ್ಲಿ ಆಡಳಿತ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಮತ್ತು ಯುದ್ಧಗಳನ್ನು ಯಾವ ರೀತಿ ಮಾಡುತ್ತಿದ್ದರು, ಯಾವ ರೀತಿ ಕಂದಾಯ ವಿಧಿಸುವುದು ವಸೂಲಿ ಮಾಡುತ್ತಿದ್ದರು, ಬಹಳಷ್ಟು ದೇವಾಲಯಗಳನ್ನು ನಿರ್ಮಿಸಿದ್ದು ಆವುಗಳ ಹಿನ್ನಲೆ ಮುಂತಾದವುಗಳನ್ನೆಲ್ಲಾ ಬಹಳ ಪರಿಶ್ರಮ ಮತ್ತು ಒಂದು ಇತಿಹಾಸವನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಸಂಶೋಧನೆ ಮಾಡಿರುವುದಾಗಿ ತಿಳಿಸುತ್ತಾರೆ ಅಲ್ಲದೆ ಈ ವಿಚಾರವನ್ನು ಮತ್ತೊಂದು ತಲೆಮಾರಿಗೆ ಒತ್ತೋಯುವ ಕೆಲಸ ಇದಾಗಿದ್ದು “ಇತಿಹಾಸವನ್ನು ಮರೆತವನು ಇತಿಹಾಸ ಸೃಷ್ಟಿಸಲಾರ ” ಎಂಬ ನಿಟ್ಟಿನಲ್ಲಿ ನಾನು ಈ ಅಧ್ಯಯನಕ್ಕೆ ಕೈ ಹಾಕಿದ್ದು ಈ ಗೌರವ ಪದವಿ ನನ್ನ ಇನ್ನಷ್ಟು ಕಾರ್ಯ ಸಾಧನೆಗೆ ಉತ್ಸಾಹ ಮತ್ತು ಪ್ರೇರಣೆಯನ್ನು ತಂದುಕೊಟ್ಟಿದೆ ಎಂದು ಹೇಳಿದರು.


Spread the love