Spread the love

ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಮೇಲೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮತ್ತು ಚಲವಾದಿ ನಾರಾಯಣಸ್ವಾಮಿ ದಾಖಲಿಸಿರುವ ದೂರನ್ನು ರದ್ದುಪಡಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಇಂದು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದಂಡಾಡಿಕಾರಿಗಳ ಕಚೇರಿ ಯಲ್ಲಿ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಪ್ರೊ.ಬರಗೂರು ರಾಮಚಂದ್ರಪ್ಪನವರು ಭರತನಗರಿ ಕಾದಂಬರಿಯಲ್ಲಿ ರಾಷ್ಟ್ರಗೀತೆ ಮತ್ತು ಗಂಗಾ ಮತಸ್ಥರ ದೇವತೆ ಗಂಗಾ ಮಾತೆಗೆ ಅಪಮಾನ ಮಾಡಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಪ್ರೊ. ಬರಗೂರು ರಾಮಚಂದ್ರಪ್ಪನವರು ಪತ್ರಿಕೆಗಳ ಮೂಲ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ದೂರನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಹಿರಿಯ ಸಾಹಿತಿಗಳಾದ ಸಣ್ಣಗಪ್ಪನವರು ಮಾತನಾಡಿ ಪ್ರೊ.ಬರಗೂರರು ರಾಮಚಂದ್ರಪ್ಪ ನವರು ನಮ್ಮ ನಾಡು ಕಂಡ ಅಪರೂಪದ ಸಾಹಿತ್ಯ ಕ್ಷೇತ್ರದ ದಾರ್ಶನಿಕ ವ್ಯಕ್ತಿ . ಹಾಡು ಮುಟ್ಟದ ಗಿಡವಿಲ್ಲ ಎಂಬಂತೆ ತನ್ನೆಲ್ಲ ಕ್ಷೇತ್ರದಲ್ಲಿ ಛಾಪನ್ನು ಮೂಡಿಸಿ ಚಿಂತಕರಾಗಿ ಬೆಳೆದಿದ್ದಾರೆ ಇಂತಹ ಒಬ್ಬ ಮೇರು ವ್ಯಕ್ತಿ ಯಾವುದೋ ಕಾಲಕ್ಕೆ ಬರೆದಂತಹ ಸಾಂಸ್ಕೃತಿಕ ಕಾದಂಬರಿ ಯಾದಂತ ಲೇಖನದಲ್ಲಿ ಒಂದು ಪಾತ್ರದ ಒಳ ಹೊಕ್ಕು ಮಾತನಾಡುವಾಗ ಅವರು ಪಾತ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ ಹೊರತು ನಾಡು,ನುಡಿ ಸಂಸ್ಕೃತಿಕ ಚಿಂತನೆಗೆ ದಕ್ಕೆ ತರುವಂತಹ ವ್ಯಕ್ತಿ ಅವರಲ್ಲ ಆಗಾಗಿ ಅ ವ್ಯಕ್ತಿಯ ಯಾವುದೋ ಒಂದು ಪಾತ್ರ ತೆಗೆದು ಕೊಂಡು ಅದನ್ನು ಒಳ ಹೊಕ್ಕು ನೋಡದೆ ಅ ಲೇಖಕರ ಬಗ್ಗೆ ಅನೇಕ ಇಲ್ಲ ಸೋಲ್ಲದ ಮಾತುಗಳನ್ನಾಡಿ ಅವರನ್ನು ಒಬ್ಬ ಸಾಂಸ್ಕೃತಿಕ ಚಿಂತಕರು ಎಂದು ಪರಿಗಣಿಸದೆ ಒಂದು ಕ್ಷೇತ್ರಕ್ಕೆ ಮಾತ್ರ ಅವರನ್ನು ಸೀಮಿತ ಪಡಿಸುತ್ತಿದ್ದಾರೆ . ದಯವಿಟ್ಟು ಇಂತಹ ವ್ಯಕ್ತಿಗಳು ಅವರ ಲೇಖನಗಳನ್ನು ಒಳ ಅರ್ಥ ತಿಳಿದು ಕೊಂಡು , ಅಲ್ಲಿ ಯಾವ ವಿಷಯವಿದೆ ಎಂದು ಗ್ರಹಿಸಿಬೇಕು . ಈ ಕೂಡಲೇ ಈ ವಿಚಾರವನ್ನು ಮನಗಂಡು ಅವರ ಮೇಲಿನ ದೂರನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಈ ರಾಜ್ಯದ ಯುವ ಜನತೆ ಅವರ ಬೆಂಬಲವಾಗಿ ನಿಂತು ಹೋರಾಡುವ ಪರಿಸ್ಥಿತಿಯನ್ನು ಸೃಷ್ಟಿಸಿಕೊಳ್ಳಬಾರದು ಎಂದು ಈ ಮೂಲಕ ತಿಳಿಸಿದ್ದಾರೆ.

ಅನನ್ಯತೆಯನ್ನು ಪಡೆದ ಪ್ರಸಿದ್ದ ಲೇಖಕರು. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆಗೂ ಬರಗೂರು ಪಾತ್ರರಾದವರು. ಜೊತೆಗೆ ತುಮಕೂರು ಜಿಲ್ಲೆಯನ್ನು ಸಾಹಿತ್ಯ ಮತ್ತು ಸಿನಿಮಾಗಳ ಮೂಲಕ ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಮೇರು ವ್ಯಕ್ತಿತ್ವವುಳ್ಳ ಪ್ರಜಾಪ್ರತಿಭೆಯ ಮೇಲೆ ಕೊಟ್ಟಿರುವ ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಹೇಳಿದ್ದಾರೆ.ಪ್ರೊ.ಬರಗೂರು ರಾಮಚಂದ್ರಪ್ಪನವರು ಭರತನಗರಿ ಕಾದಂಬರಿಯನ್ನು ನಾಲ್ಕು ದಶಕಗಳ ಹಿಂದೆ ಬರೆದಿದ್ದರು. ಅದೊಂದು ರಾಜಕೀಯ ವಿಡಂಬನೆಯ ರೂಪಾತ್ಮಕ ಕಾದಂಬರಿ. ಸೃಜನಶೀಲ ಕೃತಿಗಳನ್ನು ಕೇವಲ ವಾಚ್ಯಾರ್ಥದಲ್ಲಿ ನೋಡಲಾಗದು ಎಂದು ತಿಳಿಸಿದ್ದಾರೆ.ಈ ಕಾದಂಬರಿಯಲ್ಲಿ ಅನೇಕ ಮನೋಧರ್ಮದ ಅನೇಕ ನಡವಳಿಕೆಯ ಪಾತ್ರಗಳು ಬರುತ್ತವೆ. ಲೇಖಕರು ಆಯಾ ಪಾತ್ರದ ಮನೋಧರ್ಮಕ್ಕೆ ಅನುಗುಣವಾದ ಮಾತುಗಳನ್ನು ಬರೆಯಬೇಕಾಗುತ್ತದೆ. ಅಂತೆಯೇ ಈ ಕಾದಂಬರಿಯ ಒಂದು ಪಾತ್ರವು ರಾಷ್ಟ್ರಗೀತೆಯ ದಾಟಿಯಲ್ಲಿ ದೇಶದ ಸ್ಥಿತಯನ್ನು ವಿಡಂಬಿಸುತ್ತದೆ. ಆದರೆ ರಾಷ್ಟ್ರಗೀತೆಯ ಆಶಯವನ್ನು ಎಲ್ಲಿಯೂ ವಿರೋಧಿಸುವುದಿಲ್ಲ. ವಿಡಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಈ ಬಗ್ಗೆ ಪ್ರೊ.ಬರಗೂರರು ಈಗಾಗಲೇ ಬಹಿರಂಗ ಸ್ಪಷ್ಟನೆ ನೀಡಿದ್ದು, ಅಂಥ ಯಾವ ಉದ್ದೇಶವೂ ತನಗಿಲ್ಲವೆಂದೂ ಜನರಿಗೆ ತಪ್ಪು ಭಾವನೆ ಉಂಟು ಮಾಡಿದ್ದರೆ ವಿಷಾದಿಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಹೇಳಿದರು. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರವನ್ನು ಕಳುಹಿಸಿಕೊಡಲಾಯಿತು.ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ R T ಖಾನ್ , ಮಾದಿಗ ದಂಡೋರ ಅಧ್ಯಕ್ಷರಾದ ಹನುಮಂತರಾಯಪ್ಪ ನವರು , ದಲಿತ ವಿದ್ಯಾರ್ಥಿ ಪರಿಷತ್ ತುಮಕೂರು ಜಿಲ್ಲಾ ಸಂಚಾಲಕರಾದ ಅಜಿತ್ ಕುಮಾರ್ .ಬಿ. ಓಬಯ್ಯ ನವರು, ಸಂಶೋಧನಾ ವಿದ್ಯಾರ್ಥಿ ಮಲ್ಲಿಕಾರ್ಜುನ್, ಮುಂತಾದವರು ಹಾಜರಿದ್ದರು.


Spread the love