Spread the love

ಕೊಟ್ಟೂರು :- ಅಲಬೂರು ಹಗರಿಹಳ್ಳವು ಕಳೆದ ಎರಡು ದಿನಗಳಿಂದ ತನ್ನ ಹರಿವನ್ನು ಕಡಿಮೆ ಮಾಡಿಕೊಂಡು ಹರಿಯುತ್ತಿದ್ದು, ಇಂದು ಬೆಳಗಿನಿಂದ ಪುನ: ಸೇತುವೆ ಮೇಲೆ ಹರಿಯಲು ಪ್ರಾರಂಭಿಸಿದೆ. ಅಲಬೂರು ಗ್ರಾಮದ ಬಾರಿಕರ ಪಕ್ಕೀರಪ್ಪ ತಂದೆ ರಾಮಪ್ಪ ಇವರು ಸೇತುವೆ ಎಡಭಾಗದ ದಂಡೆಯಲ್ಲಿ ಆಕಳನ್ನು ಮೈತೊಳೆಯಲು ಹೋಗಿದ್ದು, ಆಕಸ್ಮಿಕವಾಗಿ ಆಕಳು ನೀರಿನ ಸೆಳವಿಗೆ ಕೊಚ್ಚಿಕೊಂಡು ಹೋಗಿರುತ್ತದೆ. ನೀರಿನ ಸೆಳವಿಗೆ ಸಿಕ್ಕ ಆಕಳು ಸೇತುವೆ ಕೆಳಭಾಗದಿಂದ ಈ ಕಡೆಗೆ ತೇಲಿ ಬಂದ ಪರಿಣಾಮ ನೀರು ಕುಡಿದಿದ್ದರಿಂದ ಈಜಲು ಸಾಧ್ಯವಾಗದೇ ಕೊಚ್ಚಿಕೊಂಡು ಹೋಗಿ ನೀರಿನ ಮಧ್ಯದಲ್ಲಿನ ಸಾವನ್ನಪ್ಪಿ ಜಾಲಿಗಿಡಗಳ ಮದ್ಯದಲ್ಲಿ ಸಿಕ್ಕಿ ಕೊಂಡಿದ್ದು,ಗ್ರಾಮಸ್ಥರ ಸಹಕಾರದಿಂದ ಹೊರಗೆ ತರಲಾಗಿದೆ.ಈ ಅವಘಡದಲ್ಲಿ ಆಕಳನ್ನು ರಕ್ಷಿಸಲು ಪ್ರಯತ್ನಿಸಿದ ಪಕ್ಕೀರಪ್ಪ ಹಾಗೂ ಇನ್ನೊಬ್ಬರು ನೀರಿನ ಸೆಳವಿನಲ್ಲಿ ಕೊಚ್ಚಿ ಹೋಗುತ್ತಿದ್ದರು ಗ್ರಾಮಸ್ಥರ ರಕ್ಷಣೆಯಿಂದ ಜೀವಾಪಾಯದಿಂದ ಪಾರಾಗಿದ್ದಾರೆ.ಮೃತಪಟ್ಟ ಆಕಳನ್ನು ದಡಕ್ಕೆ ತರಲಾಗಿದ್ದು ಪಶುವೈಧ್ಯರು ಪರೀಕ್ಷೆ ನಡೆಸಿದ್ದಾರೆ.ಸ್ಥಳದಲ್ಲಿ ಅಲಬೂರು ಗ್ರಾಮ ಲೆಕ್ಕಿಗರಾದ ಸುಧಾ ಜೈನರ್, ಇಟ್ಟಿಗಿ ಪೊಲೀಸ್ ಸಿಬ್ಬಂದಿ ಹಾಜರಿದ್ದು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.

ವರದಿ : ವಿಷ್ಣು . ಎಲ್. ಕೊಟ್ಟೂರು


Spread the love