Spread the love

ಬೆಂಗಳೂರು: ಚರ್ಚ್ ಗೆ ಪ್ರಾರ್ಥನೆಗೆಂದು ತೆರಳುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಗೋಪಾಲಗೌಡ ಜಂಕ್ಷನ್ ಬಳಿ ನಡೆದಿದೆ.

ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಹಬ್ಬದ ಸಡಗರದಲ್ಲಿದ್ದ ಯುವಕ ಪ್ರಾರ್ಥನೆಗೆಂದು ಚರ್ಚ್ ಗೆ ಹೊಸ ಬೈಕ್ ನಲ್ಲಿ ತೆರಳುತ್ತಿದ್ದ.

ಈ ವೇಳೆ ಬೈಕ್ ಗೋಪಾಲಗೌಡ ಜಂಕ್ಷನ್ ಬಳಿ ರಸ್ತೆ ಬದಿಯ ಪುಟ್ ಪಾತ್ ತಡೆಗೋಡೆಗೆ ಗುದ್ದಿದೆ. ಕೆಳಗೆ ಬಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಲೆಕ್ಸ್ (25) ಮೃತ ಯುವಕ. ಬೈಕ್ ಹಿಂಬದಿ ಕುಳಿತಿದ್ದ ಸತೀಶ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.


Spread the love

By admin