Spread the love

ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಹೊಸ ಪಕ್ಷ ರಚನೆ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಪಕ್ಷ ಕಟ್ಟಬಹುದು. ಹೊಸ ಪಕ್ಷ ಸ್ಥಾಪಿಸಿ ಸ್ಪರ್ಧಿಸಲು ಎಲ್ಲರಿಗೂ ಅವಕಾಶವಿದೆ ಎಂದು ತಿಳಿಸಿದ್ದಾರೆ.

 

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ಜನಾರ್ಧನ ರೆಡ್ಡಿ ಅವರ ಹೊಸ ಪಕ್ಷದ ಬಗ್ಗೆ ಏನೂ ಹೇಳುವುದಿಲ್ಲ. ಇಲ್ಲಿ ಮತದಾರರೇ ಪ್ರಭುಗಳು. ಈಗಲೆ ಎಲ್ಲವನ್ನೂ ಹೇಳಲು ಆಗಲ್ಲ ಎಂದರು.

ಕೆಲವನ್ನು ಇವತ್ತೇ ಜಡ್ಜ್ ಮೆಂಟ್ ಕೊಡಲು ಆಗಲ್ಲ, ಕಾಲವೇ ಕೆಲವೊಂದನ್ನು ನಿರ್ಣಯ ಮಾಡುತ್ತೆ ಎಂದು ಹೇಳಿದರು.


Spread the love

By admin