Spread the love

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೆಲ ಒಳ್ಳೆಯ ಸ್ನೇಹಿತರಿದ್ದಾರೆ. ಅವರ ಮೂಗಿಗೆ ಬೆಣ್ಣೆ ಹಚ್ಚುವುದಕ್ಕೆ ಸಿಎಂ ದೆಹಲಿಗೆ ಹೋಗಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸಿಎಂ ದೆಹಲಿ ಪ್ರವಾಸವನ್ನು ಟೀಕಿಸಿದ್ದಾರೆ.

 

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ಸರ್ಕಾರ 6 ತಿಂಗಳಲ್ಲ, 6 ದಿನ ನಡೆಯುತ್ತೋ ಇಲ್ವೋ ಗೊತ್ತಿಲ್ಲ. ಎಲ್ಲಾ ತಾಲೂಕುಗಳಲ್ಲಿ ಬಿಜೆಪಿ ಕಚೇರಿ ಓಪನ್ ಮಾಡ್ಬೇಕಿದೆ. ಅದಕ್ಕಾಗಿ ದೆಹಲಿ ಬಿಜೆಪಿ ನಾಯಕರಿಗೆ ಕಪ್ಪ ಕಾಣಿಕೆ ಕೊಡಲು ಸಿಎಂ ದೆಹಲಿಗೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಸಿ.ಟಿ. ರವಿ ವಿರುದ್ಧವೂ ಕಿಡಿಕಾರಿದ ಹರಿಪ್ರಸಾದ್, ಯಾರೋ ಮಾತನಾಡಿದ ಮಾತ್ರಕ್ಕೆ ತೆಲೆಕೆಡಿಸಿಕೊಳ್ಳಬೇಕಿಲ್ಲ. ಬಿಜೆಪಿಯಲ್ಲಿ ಬರಿ ಅಂತಹ ಸಂಸ್ಕಾರವಂತರೇ ತುಂಬಿದ್ದಾರೆ ಎಂದು ಗುಡುಗಿದರು.


Spread the love

By admin