Spread the love

ಬೆಂಗಳೂರು; ಹೊಂಡದಲ್ಲಿ ಈಜಲು ಹೋಗಿದ್ದ 6 ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೊರವಲಯದ ದೇವನಹಳ್ಳಿ ಬಳಿ ನಡೆದಿದೆ.

ವಸತಿ ಶಾಲೆಯ 6 ಮಕ್ಕಳು ಹಾಸ್ಟೇಲ್ ನಿಂದ ಹೊರ ಬಂದು ದೇವನಹಳ್ಳಿ ಬಳಿ ಹೊಂಡದಲ್ಲಿ ಈಜಲು ಹೋಗಿದ್ದರು.

ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಂತೋಷ್ ಹಾಗೂ ಜುನೇದ್ ಪಾಷಾ ಮೃತ ವಿದ್ಯಾರ್ಥಿಗಳು.

ಶಾಲೆಯಿಂದ ಎಲ್ಲರೂ ಪ್ರವಾಸಕ್ಕೆ ಹೋಗಿದ್ದರು.ಆದರೆ 6 ಮಕ್ಕಳು ಮಾತ್ರ ಪ್ರವಾಸಕ್ಕೆ ಹೋಗದೇ ಹಾಸ್ಟೇಲ್ ನಲ್ಲಿಯೇ ಉಳಿದಿದ್ದರು. ಹಾಸ್ಟೇಲ್ ನಲ್ಲಿದ್ದ ಯುವಕನಿಗೆ ಮಕ್ಕಳ ಜವಾಬ್ದಾರಿ ವಹಿಸಿ ಶಿಕ್ಷಕರು ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಹಾಸ್ಟೇಲ್ ನಲ್ಲಿದ್ದ 6 ವಿದ್ಯಾರ್ಥಿಗಳು ಈಜಲೆಂದು ಹೊರಗೆ ಬಂದಿದ್ದಾರೆ. ಈಜಲು ಬಾರದಿದ್ದರೂ ಹೊಂಡಕ್ಕೆ ಇಳಿದಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.


Spread the love

By admin