Spread the love

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವೆಂದು ಗಮಡು ಮಕ್ಕಳ ಆರೋಪ ಇದೆ. ಅಂತೆಯೇ ಇದೀಗ ಹುಬ್ಬಳ್ಳಿಯಲ್ಲಿ ಇದೇ ಕಾರಣಕ್ಕೆ ಯುವಕನೊಬ್ಬ ಸುಡುಗಾಡಿನಲ್ಲೇ ಬೆಂಕಿ ಹಚ್ಚಿಕೊಂಡ ಪ್ರಸಂಗವೊಂದು ನಡೆದಿದೆ.

ಹುಬ್ಬಳ್ಳಿ ತಾಲೂಕಿನ ಅಮ್ಮಿನಬಾವಿಯಲ್ಲಿ ಈ ಘಟನೆ ನಡೆದಿದೆ. ಯುವಕನನ್ನು ಸಂತೋಷ ಕೊರಡಿ (30) ಎಂದು ಗುರುತಿಸಲಾಗಿದೆ. ತನಗೆ ವಯಸ್ಸಾದರೂ ಮದುವೆಗೆ ಕನ್ಯೆ ಸಿಗಲಿಲ್ಲವೆಂದು ಯುವಕ ನೊಂದಿದ್ದನು.

ಅಲ್ಲದೆ ಮದುವೆ ಮಾಡಿಲ್ಲ ಎಂದು ಮನನೊಂದು ಮಾನಸಿಕ ಅಸ್ವಸ್ಥನಾಗಿದ್ದನು. ಇದೇ ಬೇಜಾರಿಂದ ಸ್ಮಶಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಕಿಯು ದೇಹದ ಹಲವು ಭಾಗವನ್ನು ಸುಟ್ಟು ಹಾಕಿದೆ. ದೇಹದ 50% ಭಾಗವು ಸುಟ್ಟು ಕರಕಲು ಆಗಿದ್ದು ಪ್ರಾಣಾಪಾಯಮದಿಂದ ಪಾರಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಯುವಕನಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Spread the love

By admin