Spread the love

ನೂರಾರು ಕುರಿಗಳು ತೋಟವೊಂದರಲ್ಲಿ ಬೀಡು ಬಿಟ್ಟಿದ್ದ ವೇಳೆ ಇವುಗಳ ಪೈಕಿ 27 ಕುರಿಗಳು ಹಠಾತ್ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ ಸುರೇಬಾನ – ಮನಿಹಾಳ ಗ್ರಾಮದ ತೋಟವೊಂದರಲ್ಲಿ ಚಿಲಮೂರ ಗ್ರಾಮದ ವಿಠ್ಠಲ ಲಕ್ಕಪ್ಪ ಸನದಿ ಅವರಿಗೆ ಸೇರಿದ ನೂರಕ್ಕೂ ಅಧಿಕ ಕುರಿಗಳು ಬೀಡು ಬಿಟ್ಟಿದ್ದವು.

ಸೋಮವಾರ ಬೆಳಿಗ್ಗೆ ವಿಠಲ ಅವರು ಕುರಿಗಳೊಂದಿಗೆ ರಾಮದುರ್ಗಕ್ಕೆ ಹೊರಟಿದ್ದು, ಈ ವೇಳೆ ಮಾರ್ಗ ಮಧ್ಯೆ 27 ಕುರಿಗಳು ಏಕಾಏಕಿ ಮೃತಪಟ್ಟಿವೆ.

ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೋಗ ಅಥವಾ ವಿಷಯುಕ್ತ ಆಹಾರ ಸೇವನೆಯಿಂದ ಮೃತಪಟ್ಟಿವೆಯೇ ಎಂಬುದರ ಕಾರಣ ಅರಿಯಲು ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಂಡಿದ್ದಾರೆ.


Spread the love

By admin