Spread the love

ಕ್ಟಿವ್ ಹೋಂಡಾದಲ್ಲಿ ಬಂದ ವ್ಯಕ್ತಿಯೊಬ್ಬರು ಬೆಂಗಳೂರಿನ ಕೆ ಆರ್ ಮಾರ್ಕೆಟ್ ಫ್ಲೈ ಓವರ್ ಮೇಲಿನಿಂದ ಹಣವನ್ನು ಎರಚಿದ್ದು, ಇದನ್ನು ಆರಿಸಿಕೊಳ್ಳಲು ಜನ ಮುಗ್ಗಿ ಬಿದ್ದ ಘಟನೆ ನಡೆದಿದೆ.

ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಅರುಣ್ ಎಂಬವರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದ್ದು, ಕುತ್ತಿಗೆಗೆ ಗಡಿಯಾರ ಹಾಕಿಕೊಂಡು ಬಂದ ಈ ವ್ಯಕ್ತಿ 10 ರೂಪಾಯಿ ಮುಖಬೆಲೆಯ ನೂರಾರು ನೋಟುಗಳನ್ನು ಎರಚಿದ್ದಾರೆ.

 

ಯಾವ ಕಾರಣಕ್ಕೆ ಅರುಣ್ ಈ ರೀತಿ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಇದೀಗ ಪೊಲೀಸರು ಪ್ರಕರಣದ ಕುರಿತಂತೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದು, ಬಳಿಕ ಸತ್ಯಾಂಶ ಬೆಳಕಿಗೆ ಬರಲಿದೆ.


Spread the love

By admin