Spread the love

ತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿ 30 ಅಡಿ ಎತ್ತರದ ಸೇತುವೆಯಿಂದ ಕಾಲುವೆಗೆ ನಾಲ್ಕು ಮಕ್ಕಳನ್ನು ಎಸೆದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಕ್ಕಳನ್ನು ನದಿಗೆ ತಳ್ಳಿದ ಆರೋಪದ ಮೇಲೆ 35 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ನದಿಗೆ ಬಿದ್ದ ನಾಲ್ಕು ಮಕ್ಕಳ ಪೈಕಿ 12 ವರ್ಷದ ಬಾಲಕಿ ಸುರಕ್ಷಿತವಾಗಿ ಈಜಿ ದಡ ಸೇರುವುದರ ಜೊತೆಗೆ ತನ್ನ ಇಬ್ಬರು ಒಡಹುಟ್ಟಿದವರನ್ನ ರಕ್ಷಿಸಿದ್ದಾಳೆ.

ಆದರೆ ಓರ್ವ ಮಗು ನೀರಲ್ಲಿ ಕೊಚ್ಚಿಹೋಗಿದ್ದು ನಾಪತ್ತೆಯಾಗಿದೆ. ಕಸ್ಗಂಜ್ ಜಿಲ್ಲೆಯ ಸಹವರ್ ಪೊಲೀಸ್ ವ್ಯಾಪ್ತಿಯ ಶೇಖಪುರ್ ಹುಂಡಾದಲ್ಲಿ ಈ ಘಟನೆ ನಡೆದಿದೆ.

ಆರೋಪಿ ಪುಷ್ಪೇಂದ್ರ ಕುಮಾರ್ ಸೋಮವಾರ ಕೌಟುಂಬಿಕ ಕಲಹದ ನಂತರ ಗ್ರಾಮದಿಂದ 15 ಕಿಮೀ ದೂರದಲ್ಲಿರುವ ತವರುಮನೆಗೆ ತನ್ನ ಪತ್ನಿಯನ್ನು ಬಿಡಲು ಹೋಗಿದ್ದ. ಅಲ್ಲಿಂದ ಹಿಂತಿರುಗಿದ ಬಳಿಕ ಕುಮಾರ್ ತನ್ನ ಮಕ್ಕಳನ್ನು ಹತ್ತಿರದ ಜಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ಆದರೆ ದಾರಿಯಲ್ಲಿ ಸೇತುವೆಯ ಬಳಿ ನಿಲ್ಲಿಸಿ ತನ್ನ ನಾಲ್ವರು ಮಕ್ಕಳಾದ ಸೋನು (13), ಪ್ರಭಾ (12), ಕಾಜಲ್ (8) ಮತ್ತು ಹೇಮಲತಾ (5) ಅವರನ್ನು 15 ಅಡಿ ಆಳದ ಕಾಲುವೆಗೆ ತಳ್ಳಿದ್ದ.


Spread the love

By admin