Spread the love

ಸುಣ್ಣವೆಂದು ಭಾವಿಸಿ ವೀಳ್ಯದೆಲೆಗೆ ಇಲಿ ಪಾಷಾಣ ಸವರಿಕೊಂಡು ತಿಂದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ನಾಡ ಗ್ರಾಮ ಚುಂಗಿಗುಡ್ಡೆ ನಿವಾಸಿ 71 ವರ್ಷದ ಸಾಧು ಪೂಜಾರ್ತಿ ಪಟ್ಟವರಾಗಿದ್ದಾರೆ.

ಸಾಧು ಪೂಜಾರ್ತಿ ಅವರಿಗೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸುವ ಅಭ್ಯಾಸವಿದ್ದು, ಫೆಬ್ರವರಿ 6ರಂದು ಎಂದಿನಂತೆ ವೀಳ್ಯದೆಲೆ ಸೇವಿಸಲು ಮುಂದಾದ ಅವರು ಸುಣ್ಣವೆಂದು ಭಾವಿಸಿ ಇಲ್ಲಿ ಪಾಷಾಣವನ್ನು ಸವರಿಕೊಂಡು ತಿಂದಿದ್ದರು.

 

ಇದರ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರದಂದು ಮೃತಪಟ್ಟಿದ್ದಾರೆ.


Spread the love

By admin