ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿ ಹೂತು ಹಾಕಿದ್ದ ಘಟನೆ 7 ತಿಂಗಳ ನಂತರ ಮಗಳಿಂದಲೇ ಬಹಿರಂಗವಾಗಿದೆ.
ತಂದೆಯ ಉಸಿರುಗಟ್ಟಿಸಿ ಕೊಂದ ಅಮ್ಮನ ರಹಸ್ಯವನ್ನು ಮಗಳು ಬಹಿರಂಗಪಡಿಸಿದ್ದಾಳೆ.
ಮೃತನ ಪತ್ನಿ ಹಾಗೂ ಪ್ರಿಯಕರನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಜಯನಗರ ನಿವಾಸಿ ಆಂಜನೇಯ(45) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಅನಿತಾ ಮತ್ತು ಪ್ರಿಯಕರ ರಾಕೇಶ್ ನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಜನೇಯನ 14 ವರ್ಷದ ಮಗಳು ಇತ್ತೀಚೆಗೆ ಸಂಬಂಧಿಕರ ಬಳಿ ಈ ಮಾಹಿತಿ ತಿಳಿಸಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ವಿಚಾರಣೆ ನಡೆಸಿದಾಗ ಅನಿತಾ ಗಂಡನ ಕೊಲೆಯ ವಿಚಾರ ತಿಳಿಸಿದ್ದಾಳೆ.
ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ನಡೆದ ಆರೋಪದ ಹಿನ್ನೆಲೆಯಲ್ಲಿ ನಂದಿನಿ ಲೇಔಟ್ ಠಾಣೆಯಿಂದ ಜೆಸಿ ನಗರ ಠಾಣೆಗೆ ಪ್ರಕರಣವನ್ನು ಉತ್ತರ ವಿಭಾಗದ ಡಿಸಿಪಿ ವಿನಾಯಕ ವಸಂತರಾವ್ ಪಾಟೀಲ್ ವರ್ಗಾಯಿಸಿದ್ದಾರೆ.