ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಭಾರತ ಜನತಾ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಕೋಡಿಹಳ್ಳಿ ಭೀಮಣ್ಣ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೂ ಬೇಟಿ ನೀಡಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ ಕ್ಷೇತ್ರದಲ್ಲಿ ತಮ್ಮದೆ ಆದ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ಕೋಡಿಹಳ್ಳಿ ಭೀಮಣ್ಣ ಕ್ಷೇತ್ರದ ಜನತೆಗೆ ಚಿರಪರಿಚಿತವಾಗಿರುವುದರಿಂದ ಇಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಚಂದ್ರಶೇಖರಪುರ, ಎಕ್ಕೆಗುಂದಿ, ಚಿರತಗುಂಡು,ಗಡ್ಡದಬೋರಯ್ಯನಹಟ್ಟಿ,
ಹಾಗೂ ಮೀನಕೆರೆ ಗ್ರಾಮಗಳಿಗೆ ಬೇಟಿ ನೀಡಿದರು ಚಿರತಗುಂಡು ಹಾಗೂ
ಗಡ್ಡದಬೋರಯ್ಯನಹಟ್ಟಿ ಗ್ರಾಮಗಳಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಶಬರಿಯಾತ್ರೆಗೆ ಹೊರಡುವಮುನ್ನ ಮಾಲಾಧಾರಿಗಳನ್ನು ಬೇಟಿ ಎಲ್ಲಾ ಮಾಲಾಧಾರಿಗಳಿಗೆ ಹೂಮಾಲೆ ಹಾಕುವುದರ ಮೂಲಕ ಶಬರಿಯಾತ್ರೆಗೆ ಶುಭಕೋರಿದರು ನಂತರ ಮೀನಕರೆ ಗ್ರಾಮಕ್ಕೆ ಭೇಟಿನೀಡಿದಾಗ ಗ್ರಾಮದ ಜನತೆ ಅದ್ದೂರಿಯಾಗಿ ಸ್ವಾಗತಿಸಿದರು ಮೆರವಣಿಗೆ ಮೂಲಕ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬೇಟಿ ದೇವರ ದರ್ಶನ ಪಡೆದರು. ನಂತರ ಮೀನಕೆರೆ ಗ್ರಾಮದ ಯುವನಾಯಕ ಹರೀಶ್ ಮಾತನಾಡಿ ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿವಹಿಸುಂತಹ ಸರಳ ವ್ಯಕ್ತಿತ್ವವನ್ನು ಹೊಂದಿರುವ ಕೋಡಿಹಳ್ಳಿ ಭೀಮಣ್ಣ ನಮ್ಮ ಕ್ಷೇತ್ರಕ್ಕೆ ತುಂಬಾ ಅತ್ಯಾವಶ್ಯಕ ಎಂದು ಹೇಳಿದರು.
ವರದಿ : ಬೋರಯ್ಯ ಜಿ. ಜಿ
ಪ್ರತಿಭಟನೆ ನ್ಯೂಸ್ ವಿಜಯನಗರ