ಆನೇಕಲ್ ತಾಲ್ಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಇಂದು ಮನೆ ಕಸಸಂಗ್ರಹಣೆ ಮತ್ತು ಸ್ವಚ್ಛತೆಯ ಬಗ್ಗೆ ಅರಿವಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆನೇಕಲ್ ಪುರಸಭೆಯ ಅಧಿಕಾರಿಗಳು ಮತ್ತು ವಾರ್ಡಿನ ಸದಸ್ಯರು ಮನೆ ಮನೆಗೆ ತೆರಳಿ ಸ್ವಚ್ಛತೆಯ ಹಾಗೂ ಕಸವಿಂಗಡನೆಯ ಪ್ರಯೋಜನವನ್ನು ಜನರಿಗೆ ಖುದ್ದು ತಿಳಿಸುತ್ತಿದ್ದರು .
ಅದರಂತೆ ವಾರ್ಡ್ ನಂ-1ರ ಸದಸ್ಯೆ ಭಾರತಿ ವಿರುಪಾಕ್ಷಯ್ಯ ,
ವಾರ್ಡ್ ನಂ-8ರ ಸದಸ್ಯರಾದ ಬಿ.ನಾಗರಾಜು ವಾರ್ಡ್ ನಂ-17ರ ಸದಸ್ಯರಾದ ರಾಜೇಂದ್ರ ಪ್ರಸಾದ್ ಬಾಬು ರವರು ತಮ್ಮ ವಾರ್ಡಿನ ಜನರೊಂದಿಗೆ ಒಣ ಹಾಗೂ ಅಸಿಕಸದ ಬೇರ್ಪಡಿಸುವ ಹಾಗೂ ರಸ್ತೆಯಲ್ಲಿ ಕಸ ಹಾಕದಂತೆ ಅರಿವು ಮೂಡಿಸಿದರು.ಸ್ವಚ್ಛತ್ತೆಯ ಅರಿವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಎಲ್ಲಾ ಸದಸ್ಯರಿಗೆ ಆನೇಕಲ್ ಪುರಸಭೆ ಅಧ್ಯಕ್ಷರು ಪದ್ಮನಾಭ ಧನ್ಯವಾದಗಳು ತಿಳಿಸಿದರು..