Spread the love

ತುಮಕೂರು: ಬಡವರು, ಮಹಿಳೆಯರು, ಅಂಗವಿಕಲರಿಗೆ ಶಕ್ತಿ ತುಂಬಲು ನಾನು ಹೋರಾಡುತ್ತಿದ್ದೇನೆ ಹೊರತು ಮುಖ್ಯಮಂತ್ರಿ ಹುದ್ದೆಗಾಗಿ ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿಯಾಗಬೇಕೆಂದು ಹೋರಾಟ ನಡೆಸಿಲ್ಲ, ಅಂಗವಿಕಲರು, ಅಸಹಾಯಕರು, ಬಡವರಿಗೆ ಶಕ್ತಿ ತುಂಬಲು ಹೋರಾಡುತ್ತಿದ್ದೇನೆ.

ನಿತ್ಯವೂ ಬಡ ತಾಯಂದಿರು ಕುಟುಂಬದ ನೋವು ಹೇಳಿಕೊಳ್ಳುತ್ತಿದ್ದಾರೆ. ಅವರ ನೋವಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕಿದೆ ಎಂದರು.

ನಾನು ದೊಡ್ಡ ಶಾಲೆ, ಇಂಡಸ್ಟ್ರೀಸ್, ಕಾಂಪ್ಲೆಕ್ಸ್ ಕಟ್ಟಿಕೊಂಡಿಲ್ಲ. ನಾವು ಮಣ್ಣಿನ ಮಕ್ಕಳು. ಅದರಲ್ಲೇ ದುಡಿಯಬೇಕು. ಚಿತ್ರರಂಗದ ವಿತರಕನಾಗಿದ್ದಾಗ ಬಂದ ಹಣದಿಂದ ಜಮೀನು ಖರೀದಿ ಮಾಡಿದ್ದೇನೆ. ಆ ಹಣದಲ್ಲಿ 40 ಎಕರೆ ಜಮೀನು ಖರೀದಿಸಿದ್ದೇನೆ. ರಾಜಕೀಯದಿಂದ ನಾನು ಹಣ ಮಾಡಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.


Spread the love

By admin