Spread the love

ಬೆಂಗಳೂರು: ವೈಯಕ್ತಿಕ ವಿಚಾರಗಳು ವೈಯಕ್ತಿಕ ಜಾತಿ ಬಗ್ಗೆ ರಾಜಕಾರಣದಲ್ಲಿ ಮಾತನಾಡುವುದು ಅಪ್ರಸ್ತುತವಾಗಿದ್ದು, ನಮ್ಮ ಪಕ್ಷಗಳು, ನಮ್ಮ ಕಾರ್ಯಕ್ರಮಗಳು ಏನೆಲ್ಲ ಮಾಡಲು ಸಾಧ್ಯವೋ ಇವುಗಳ ಬಗ್ಗೆ ಮಾತನಾಡಿದರೆ ಜನ ಬಹಳಷ್ಟು ಚಿಂತನೆ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಟಾಂಗ್ ನೀಡಿದ್ದಾರೆ.

 

ಅವರು ಅವರ ಪಕ್ಷವನ್ನು ಸರಿಪಡಿಸಿಕೊಳ್ಳಲಿ: ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಮೊದಲು ಅವರ ಪಕ್ಷವನ್ನು ಅವರು ಸರಿ ಮಾಡಿಕೊಳ್ಳಲಿ. ಅವರು ಬಹಳ ಕಷ್ಟಪಟ್ಟು ಓಡಾಡುತ್ತಾರೆ. ಅವರು ಅವರ ಪಕ್ಷವನ್ನು ಸರಿಪಡಿಸಿಕೊಳ್ಳಲಿ. ಯಾವ ಬ್ರಾಹ್ಮಣರು, ಇನ್ನಿತರ ಸಮುದಾಯದವರು ಇದೆಲ್ಲದರ ಬಗ್ಗೆ ಜನ ನೋಡುವುದಿಲ್ಲ. ಇವೆಲ್ಲ ಮಾತುಗಳು ರಾಜಕಾರಣಗಳಿಗೆ ಅಪ್ರಸ್ತುತ ಎಂದರು.

ನಮ್ಮ ಪಕ್ಷಗಳು, ನಮ್ಮ ಕಾರ್ಯಕ್ರಮಗಳು ಏನೆಲ್ಲ ಮಾಡಲು ಸಾಧ್ಯ?. ಅವುಗಳನ್ನು ಮಾತನಾಡಿದರೆ ಜನ ಬಹಳಷ್ಟು ಚಿಂತನೆ ಮಾಡುತ್ತಾರೆ. ವೈಯಕ್ತಿಕ ವಿಚಾರಗಳು, ಜಾತಿ ಬಗ್ಗೆ ರಾಜಕಾರಣದಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದು ಸಿಎಂ ಬೊಮ್ಮಾಯಿ ಅವರು ಕುಮಾರಸ್ವಾಮಿಗೆ ಸಲಹೆ ನೀಡಿದರು.


Spread the love

By admin