Spread the love

ಬೆಂಗಳೂರು: ಅಮಿತ್ ಶಾ ರಾಜ್ಯಕ್ಕೆ ಬಂದಿರುವುದು ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಅರಮನೆ ಮೈದಾನದಲ್ಲಿ ಮಾತನಾಡಿದ ಅವರು, ಹಳೆ ಮೈಸೂರಿಗೆ ಬಂದಿದ್ದರಿಂದ ದಕ್ಷಿಣ ಕರ್ನಾಟಕ ದಲ್ಲಿಯೂ ಪಕ್ಷಕ್ಕೆ ಸದೃಢಗೊಳ್ಳಲು ಸಹಕಾರಿಯಾಗಲಿದೆ.

2023ರಲ್ಲಿಯೂ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ದೇಶಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧ ಎನ್ನುವ ದೇಶ ಭಕ್ತರ ಪಕ್ಷ ಬಿಜೆಪಿ, ಕಾಂಗ್ರೆಸ್ ಪಕ್ಷದ ಸದಸ್ಯರು ಕೇವಲ ಅಧಿಕಾರಕ್ಕಾಗಿ ಇರುವ ಸದಸ್ಯರಾಗಿದ್ದಾರೆ.

ಬಿಜೆಪಿ ಸದಸ್ಯರದ್ದು ದೇಶ ಸೇವೆಯಾಗಿದೆ. ನಾವು ಭಾರತ್ ಮಾತಾ ಕಿ ಜೈ ಎಂದರೆ, ಕಾಂಗ್ರೆಸ್​ನವರು ಇಟಲಿ ಮಾತೆಗೆ ಜೈ ಎನ್ನುತ್ತಾರೆ ಎಂದು ಟೀಕಿಸಿದರು. ಈ ದೇಶವನ್ನು ಉಳಿಸಿ ಬೆಳೆಸಿ, ಉಜ್ವಲ ಭವಿಷ್ಯ ರೂಪಿಸುವುದು ಬಿಜೆಪಿಯಿಂದ ಮಾತ್ರ ಸಾಧ್ಯ. ದೇಶದ ಅಖಂಡತೆ, ಏಕತೆ, ಸುರಕ್ಷತೆ, ಆರ್ಥಿಕತೆ ಎಲ್ಲವೂ ಬಿಜೆಪಿ ಮಾಡಲು ಸಾಧ್ಯ. ದೇಶದ ಯಶಸ್ಸಿಗೆ ನೀತಿ, ಸಿದ್ಧಾಂತ, ನಾಯಕತ್ವ, ಕ್ರಿಯಾಶೀಲ ಸದಸ್ಯರು ಮುಖ್ಯ, ನಮಗೆ ಮೋದಿ ನಾಯಕತ್ವ ಸಿಕ್ಕಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಭಾರತವು ಪ್ರಗತಿಯಲ್ಲಿ ಹಿಂದೆ ಹೋಯಿತು. ಸಿಂಗ್​​ ಅವರು ಭ್ರಷ್ಟತೆಯಿಂದ ಆಳ್ವಿಕೆ ಮಾಡಿದರು. ಇದಕ್ಕೆಲ್ಲ ಮೋದಿ ಸರ್ಕಾರ ಗುಜರಾತ್ ಮಾಡೆಲ್ ಮೂಲಕ ಎಲ್ಲದಕ್ಕೆ ಇತಿಶ್ರೀ ಹಾಡಿದೆ ಎಂದರು.


Spread the love

By admin